‘2013ರಲ್ಲಿ ದಾಭೋಲ್ಕರ್ ಅವರಿಗೆ ಗುಂಡಿಕ್ಕಿದವರು ಎಂದು ಸಿಬಿಐ ಅಧಿಕಾರಿಗಳು ಗುರುತಿಸಿರುವ ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಅವರ ಬ್ಯಾಂಕ್ ವ್ಯವಹಾರ, ಎಟಿಎಂನಿಂದ ಹಣ ಪಡೆದ ವಿವರ, ರೈಲು ಸೀಟ್ ಕಾಯ್ದಿರಿಸಿದ ವಿವರಗಳನ್ನೆಲ್ಲ ಪರಿಶೀಲಿಸಿ. ಇವರು ನಾಲ್ಕೈದು ರಾಜ್ಯಗಳಲ್ಲಿ ಸಂಚರಿಸಿರುವ ಸಾಧ್ಯತೆ ಇದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಯಾರೊಬ್ಬರೂ ದೀರ್ಘಾವಧಿ ಬಚ್ಚಿಟ್ಟುಕೊಳ್ಳುವುದು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.