ಮುಂದಿನ ಮಂಗಳವಾರ (ಆ. 29) ಈ ಸಭೆ ನಡೆಯಲಿದೆ. ಬ್ರೋಕರ್ ಇನ್ವೆಸ್ಟಿಕ್ ಇಂಡಿಯಾ ಸಂಘಟಿಸಲಿರುವ ಈ ಸಂವಾದ ಕಾರ್ಯಕ್ರಮದಲ್ಲಿ ಜಾಗತಿಕ ಹೂಡಿಕೆದಾರರನ್ನು ಉದ್ದೇಶಿಸಿ ಮೂರ್ತಿ ಮಾತನಾಡಲಿದ್ದಾರೆ. ಕಾರ್ಪೊರೇಟ್ ಆಡಳಿತ ಅನುಸರಿಸುವಲ್ಲಿನ ವೈಫಲ್ಯ ಮತ್ತು ಇತರ ಕಾರಣಗಳಿಗಾಗಿ ಮೂರ್ತಿ ಅವರು ನಿರ್ದೇಶಕ ಮಂಡಳಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ.