‘ಚೆನ್ನಾಗಿ ಕಳಿತ ಗೊಬ್ಬರದಲ್ಲಿ ಪಾರ್ಥೇನಿಯಂ ಮೊಳಕೆಯೊಡುವುದು ಕಡಿಮೆ. ಹೂ ಬಿಡುವ ಮುಂಚೆಯೇ ಕಿತ್ತು ಹಾಕಿದರೆ, ಬೀಜೋತ್ಪಾದನೆ ಆಗುವುದಿಲ್ಲ. ಗಿಡವನ್ನು ಬೇರು ಸಹಿತ ಕಿತ್ತು ಹಾಕದಿದ್ದರೆ, ಮತ್ತೆ ಚಿಗುರುವ ಸಾಧ್ಯತೆ ಇದೆ. ಹೆಸರು ತಗಟೆ, ಗಂಡು ತಗಟೆ, ದೊಡ್ಡ ತಗಟೆ, ಗಂಗ ತುಳಸಿ, ವಿಲಾಯತಿ ತೊಗರಿ ಗಿಡ, ಅಡವಿ ನೀಲಿ ಗಿಡ, ಆವರಿಕೆ, ತಂಗಡಿ ಗಿಡ, ಮಧ್ಯಾಹ್ನ ಮಲ್ಲಿಗೆ ಗಿಡಗಳ ಬೀಜಗಳನ್ನು ಪಾರ್ಥೇನಿಯಂ ಗಿಡಗಳ ನಡುವೆ ಎರಚಬೇಕು. ಇದರಿಂದ ಪಾರ್ಥೇ ನಿಯಂ ಗಿಡಗಳು ಕ್ರಮೇಣ ಕಡಿಮೆ ಯಾಗುತ್ತವೆ ಎಂದು ಉಪನ್ಯಾಸ ನೀಡಿದ ವಿಜ್ಙಾನಿಗಳು ಸಲಹೆ ನೀಡಿದರು.