ಬೆಂಗಳೂರು, ಆ. 28– ಶ್ರೀಮನ್ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರು ಪ್ರಯಾಣ ಮಾಡುತ್ತಿದ್ದ ಮೋಟಾರ್ ಕಾರಿಗೂ ಮತ್ತು ಬಿ.ಟಿ.ಎಸ್. ಬಸ್ಸಿಗೂ ಇಂದು ಸಂಜೆ ಕೆ.ಆರ್. ಸರ್ಕಲ್ ಬಳಿ ಲಘು ಡಿಕ್ಕಿ ಆಯಿತು. ಯಾರಿಗೂ ಗಾಯಗಳೇನು ಆಗಲಿಲ್ಲ. ಕಾರಿನ ‘ಮಡ್ಗಾರ್ಡ್‘ಗೆ ಮಾತ್ರ ಸ್ವಲ್ಪ ಪೆಟ್ಟಾಗಿದೆ. ಮಹಾರಾಜರು ಆನಂತರ ಇನ್ನೊಂದು ಕಾರಿನಲ್ಲಿ ನಗರದಲ್ಲಿರುವ ತಮ್ಮ ಅರಮನೆಗೆ ತೆರಳಿದರು.