ಜಿಲ್ಲಾ ಪಂಚಾಯ್ತಿಗೆ ಸೇರಿದ ಮಳಿಗೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳದಿದ್ದರೂ, ಕಾಮಗಾರಿ ಪೂರ್ಣಗೊಂಡಿದೆ ಎಂದು ಪ್ರಮಾಣ ಪತ್ರ ನೀಡಿ ₹ 18 ಲಕ್ಷ ಹಣ ಪಾವತಿಯಾಗಿರುವ ಕುರಿತು ಕಳೆದ ಬುಧವಾರ (ಆ. 23) ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಆರೋಪ ಮಾಡಿದ್ದರು. ಚರ್ಚೆ ಸಂಜೆಯವರೆಗೂ ನಡೆದಿದ್ದರಿಂದ ಈ ವಿಷಯ ಕುರಿತು ಚರ್ಚಿಸಲು ಸಭೆಯನ್ನು ಸೋಮವಾರ (ಅ. 28)ಕ್ಕೆ ಮುಂದೂಡಲಾಗಿತ್ತು.