ಸ್ಥಳಕ್ಕೆ ಬಂದ ಅಬಕಾರಿ ಅಧಿಕಾರಿಗಳು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ‘ಬಾರ್ ಬಂದ್ ಮಾಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಮನೋಹರ ಹೊಸೂರ, ಅಚ್ಯುತರಾವ್ ಮಹಿಷಿ, ಸಿ.ವಿ. ನರಗುಂದ, ವೀಣಾ ಕುಬಸದ, ಶಕುಂತಲಾ ದೊಡ್ಡಮನಿ, ಕಸ್ತೂರಿ ಪಾಟೀಲ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.