ಇದಕ್ಕೆ ಕೆಲ ನ್ಯಾಯಬೆಲೆ ಅಂಗಡಿಯ ಮಾಲೀಕರು ವಿರೋಧ ವ್ಯಕ್ತಪಡಿಸಿದರು. ‘ಜನರಿಗೆ ನೀಡುವ ಉಪಹಾರ, ಊಟ, ಸಾರಿಗೆಯಂತಹ ಸವಲತ್ತಿನಲ್ಲಿ ಸಮಸ್ಯೆಯಾದರೆ ಅದಕ್ಕೆ ಯಾರು ಜವಾಬ್ದಾರರು? ನರೇಗಾ ಯೋಜನೆಗೆ ಕೂಲಿಕಾರರು ಸಿಗದಂತಹ ಸ್ಥಿತಿ ಇದೆ. ಇಡೀ ದಿನ ಎಲ್ಲ ಕೆಲಸಗಳನ್ನು ಬದಿಗೊತ್ತಿ ಯಾವ ಫಲಾನುಭವಿ ಬರುತ್ತಾರೆ’ ಎಂದರು.