ಬೈಂದೂರು: ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಗುರುವಾರ ಮೀನುಗಾರಿಕಾ ದೋಣಿ ಮಗುಚಿದ್ದು, ಅದರಲ್ಲಿದ್ದ ಇಬ್ಬರು ಮೀನುಗಾರರು ಪಾರಾಗಿದ್ದಾರೆ. ಬೆಳಿಗ್ಗೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಶ್ರೀ ಸಿದ್ಧಿವಿನಾಯಕ ಹೆಸರಿನ ಮೀನುಗಾರಿಕಾ ದೋಣಿಯು ಅಳಿವೆ ಪ್ರದೇಶದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿಮರಳಿನ ದಿಣ್ಣೆಗೆ ಬಡಿದು ಮಗುಚಿದೆ.