ಮಂಗಳೂರು: 2016–17ನೇ ವರ್ಷದಲ್ಲಿ ನಿಗದಿತ ಗಡುವಿನೊಳಗೆ ಆಸ್ತಿ ವಿವರ ಸಲ್ಲಿಸದ ವಿಧಾನ ಪರಿಷತ್ನ ಮೂವರು ಸದಸ್ಯರು ಮತ್ತು ವಿಧಾನಸಭೆಯ ಒಬ್ಬ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ವರದಿ ಸಲ್ಲಿಸಲಾಗಿದೆ ಎಂದು ಲೋಕಾಯುಕ್ತ, ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ತಿಳಿಸಿದರು.
ನಗರದಲ್ಲಿ ಭಾನುವಾರ ಈ ಕುರಿತು ‘ಪ್ರಜಾವಾಣಿ’ ಜತೆ ಮಾಹಿತಿ ಹಂಚಿಕೊಂಡ ಅವರು, ‘ಕಳೆದ ವರ್ಷ ಮೊದಲ ಗಡುವಿನ ಅವಧಿಯೊಳಗೆ ಹಲವು ಶಾಸಕರು ಆಸ್ತಿ ವಿವರ ಸಲ್ಲಿಸಿರಲಿಲ್ಲ. ನೋಟಿಸ್ ಜಾರಿ ಮಾಡಿದ ಬಳಿಕ ಬಹುತೇಕರು ಆಸ್ತಿ ವಿವರ ಸಲ್ಲಿಸಿದರು. ಮಾಹಿತಿ ನೀಡಲು ವಿಫಲರಾದ ನಾಲ್ವರು ಶಾಸಕರ ಹೆಸರನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು. ಆ ಬಳಿಕವೂ ಅವರು ಮಾಹಿತಿ ನೀಡಿಲ್ಲ’ ಎಂದರು.