ರೈತ ಹಳಿಮನಿ ಅವರು, ಕಳೆದ ವರ್ಷ ಸರ್ಕಾರದ ಸಹಾಯಧನ ಸಿಗುವ ಭರವಸೆಯಿಂದ ತಮ್ಮ ಜಮೀನಿನಲ್ಲಿ 60*60 ಸುತ್ತಳತೆ ಹಾಗೂ 17 ಅಡಿ ಆಳದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. 1,000 ಅಡಿಗೂ ಅಧಿಕ ಬದು ನಿರ್ಮಾಣ ಮಾಡಿಕೊಳ್ಳುವುದಕ್ಕಾಗಿ ಲಕ್ಷಾಂತರ ಹಣ ಸುರಿದಿದ್ದಾರೆ. ಆದರೆ, ಕೃಷಿ ಇಲಾಖೆಯಿಂದ ಸಿಗಬೇಕಾದ ಹಣ ಮಾತ್ರ ಸಿಗುತ್ತಿಲ್ಲ. ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.