ಮುಂಗಾರು ಆರಂಭದಲ್ಲಿ ಸಾಧಾರಣ ಮಳೆಯಾಗಿದ್ದರಿಂದ ಕೆರೆಗಳಿಗೆ ಅಲ್ಪಸ್ವಲ್ಪ ನೀರು ಬಂದಿತ್ತು. ಶನಿವಾರದಿಂದ (ಸೆ.2) ಭಾರಿ ಮಳೆಯಾಗಿದ್ದು, ಕೆರೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದೆ. ಆವಣಿ, ಹೊಸಕೆರೆ, ದೊಡ್ಡಹೊನ್ನ ಶೆಟ್ಟಿಹಳ್ಳಿ, ಕೀಲುಹೊಳಲಿ, ಪುತ್ತೇರಿ, ದೇವರಾಯಸಮುದ್ರ, ಮೇಲೇರಿ, ಭೀಮಾಪುರ, ಕುರುಡುಮಲೆ, ದುಗ್ಗಸಂದ್ರ, ಸಿದ್ದಘಟ್ಟ, ಮಾದಘಟ್ಟ ಗ್ರಾಮದ ಕೆರೆಗಳು ಕೋಡಿ ಬಿದ್ದಿವೆ.