ಔರಾದ್: ಮಾಂಜ್ರಾ ನದಿಗೆ ಅಡ್ಡಲಾಗಿರುವ ತಾಲ್ಲೂಕಿನ ಕೌಠಾ (ಬಿ) ಬಳಿಯ ಸೇತುವೆಯ ಒಂದು ಭಾಗದ ತಡೆಗೋಡೆ ಕುಸಿದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಅಂತರರಾಜ್ಯ ಸಂಪರ್ಕ ಕಲ್ಪಿಸುವ ಬೀದರ್–ನಾಂದೇಡ್ ರಸ್ತೆಗೆ ಅಡ್ಡಲಾಗಿರುವ ಈ ಸೇತುವೆ ಸುಮಾರು ಐದು ದಶಕದಷ್ಟು ಹಳೆಯದಾಗಿದ್ದು, ಮೂರು ದಿನಗಳ ಹಿಂದೆ ಗಣೇಶ ವಿಸರ್ಜನೆ ವೇಳೆ ಒಂದು ಭಾಗದ ತಡೆಗೋಡೆ ಕುಸಿದಿದೆ ಎಂದು ಕೌಠಾ ಗ್ರಾಮಸ್ಥರು ಹೇಳಿದರು.