ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕ್ಕೆ ಆಫರ್‌: ಮೋಡದಲ್ಲಿ ತೇಲುತ್ತಿದ್ದಾರಂತೆ ಐಶ್ವರ್ಯಾ

Last Updated 10 ಸೆಪ್ಟೆಂಬರ್ 2017, 11:27 IST
ಅಕ್ಷರ ಗಾತ್ರ

ತಮಿಳಿನಿಂದ ಮಲಯಾಳಂಗೆ ವಲಸೆ ಬಂದ ನಟಿ, ನಿರೂಪಕಿ ಐಶ್ವರ್ಯಾ ರಾಜೇಶ್ ಅವರಿಗೆ ಈಗ ಖುಷಿಯನ್ನು ಹತೋಟಿಗೆ ತರಲು ಆಗುತ್ತಿಲ್ಲವಂತೆ. ಇದಕ್ಕೆ ಕಾರಣ ಮಣಿರತ್ನಂ ಅವರ ಮುಂದಿನ ಚಿತ್ರಕ್ಕೆ ಐಶ್ವರ್ಯಾಗೆ ಆಫರ್‌ ಸಿಕ್ಕಿರುವುದು.

‘ಹೌದು, ಮಣಿರತ್ನಂ ನನಗೆ ಚಿತ್ರದಲ್ಲಿ ನಟಿಸುವಂತೆ ಹೇಳಿದ್ದಾರೆ. ನಾನೀಗ ಭೂಮಿ ಮೇಲಿಲ್ಲ. ಮೋಡದಲ್ಲಿ ತೇಲಾಡುತ್ತಿದ್ದೇನೆ ಅಂತ ಅನಿಸುತ್ತಿದೆ’ ಎಂದು ಐಶ್ವರ್ಯಾ ಹೇಳಿಕೊಂಡಿದ್ದಾರೆ.

ಸನ್‌ ಟಿ.ವಿ.ಯ ‘ಅಸತ ಪೋವದು ಯಾರು’ ಎಂಬ ಕಾರ್ಯಕ್ರಮದ ನಿರೂಪಕಿಯಾಗಿ ಐಶ್ವರ್ಯಾ ತಮಿಳುನಾಡಿನಲ್ಲಿ ಮನೆ ಮಾತಾಗಿದ್ದರು. ಇದಾದ ಬಳಿಕ ರಿಯಾಲಿಟಿ ಶೋ ಹಾಗೂ ತಮಿಳು ಸಿನಿಮಾ ಮೂಲಕ ಸದಾ ಸುದ್ದಿಯಲ್ಲಿದ್ದರು.

ಮಾಲಿವುಡ್‌ಗೆ ಐಶ್ವರ್ಯಾ ಕಾಲಿಟ್ಟದ್ದು ‘ಜೋಮಂಟೆ ಸುವಿಶೇಂಗಳ್‌’ ಮತ್ತು ನಿವಿನ್‌ ಪೌಲಿ ಜತೆಗಿನ ‘ಸಖಾವು’ ಹೊಸ ಹವಾ ಸೃಷ್ಟಿಸಿತ್ತು. ಆದರೆ ತಮಿಳಿನ ನಂಟು ‘ವಾದಾ ಚೆನ್ನೈ’ ಮತ್ತು ‘ಧ್ರುವ ನಚತೀರಮ್‌’ ಮೂಲಕ ಮುಂದುವರಿಯಿತು. ಇದೀಗ, ಮಣಿರತ್ನಂ ಸಿನಿಮಾದಲ್ಲಿ ಅವಕಾಶ ಸಿಕ್ಕಿರುವುದು ಹೊಸ ಬ್ರೇಕ್‌ ನೀಡುವ ವಿಶ್ವಾಸದಲ್ಲಿದ್ದಾರೆ ಈ ‘ಹೋಮ್ಲಿ ಹುಡುಗಿ’.

ಮೊನ್ನೆಯಷ್ಟೇ, ಜ್ಯೋತಿಕಾ ಅವರ ಹೆಸರು ಮಣಿರತ್ನಂ ಹೊಸ ಚಿತ್ರದಲ್ಲಿ ಕೇಳಿಬಂದಿತ್ತು. ಬಹುತಾರಾಗಣವನ್ನು ಹೊಂದಿರುವ ಅದೇ ಚಿತ್ರಕ್ಕೆ ಐಶ್ವರ್ಯಾಗೆ ಆಫರ್‌ ಬಂದಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT