ಇದೇ ಪ್ರಶ್ನೆ ಮುಖ್ಯಮಂತ್ರಿ ಅವರ ಮಾತಿನ ಧಾಟಿಯಲ್ಲಿಯೇ ‘ಟಿಪ್ಪು’ ಅವರೂ ರಾಜ್ಯದ ಜನರಿಗೋಸ್ಕರ ಕೊಡುಗೆ ನೀಡಿದ್ದರೆ ಅದು ಕೂಡ ‘ಜನರಿಂದ ಜನರಿಗೆ’. ಅದಕ್ಕೆ ಅವರ ಜಯಂತಿ ಏಕೆ? ಇನ್ನು ಇದ್ದವರಿಂದ ಜಮೀನನ್ನು ಸ್ವಾಧೀನಪಡಿಸಿಕೊಂಡು ಭೂರಹಿತರಿಗೆ ಹಂಚಿದ್ದು ಏಕೆ? ಈ ಸಾಧನೆಯಿಂದ ಜಮೀನು ಕಳೆದುಕೊಂಡ ದೇವಸ್ಥಾನಗಳು, ಸಾಹುಕಾರರು, ಯಜಮಾನರು ಅನಾಥರಾದರು! ಇರಲಿ. ಆದರೆ ಫಲಾನುಭವಿಗಳಾದರೂ ಉದ್ಧಾರ
ವಾದರೆ? ಸರ್ಕಾರ ಇದರ ಸಮೀಕ್ಷೆ ನಡೆಸಿದೆಯೇ? ಕೆಂಪೇಗೌಡರ ಬದಲಿಗೆ ಬೇರೊಬ್ಬ ‘ನಾಯಕ’ರ ಫೋಟೊಗೆ ಪೂಜೆ ಸಲ್ಲಿಸುವ ನಮ್ಮ ರಾಜಕಾರಣಿಗಳಿರುವಾಗ ಇಂತಹ ಜಯಂತಿಗಳಿಗೆ ಎಂಥ ಮಾನ್ಯತೆ ಬರಬಹುದು?