‘ಏಕರೂಪ ನಾಗರಿಕ ಸಂಹಿತೆಗೆ ವೇದಿಕೆ ಸಿದ್ಧ’ ಲೇಖನದ ಮೂಲಕ ಕ್ಯಾಪ್ಟನ್ ಗೋಪಿನಾಥ್ ಅವರು ವ್ಯಕ್ತಪಡಿಸಿದ ಚಿಂತನೆ ಸ್ವಾಗತಾರ್ಹ (ಪ್ರ.ವಾ., ಸೆ. 3). ಭಾರತದಲ್ಲಿ ವಾಸಿಸುತ್ತಿರುವ ಇಸ್ಲಾಂ, ಕ್ರೈಸ್ತ, ಬೌದ್ಧ, ಹಿಂದೂ, ಸಿಖ್... ಎಲ್ಲಾನಾಗರಿಕರಿಗೆ ಸಂವಿಧಾನವು ಏಕರೂಪ ಹಕ್ಕುಗಳನ್ನು
ಕಲ್ಪಿಸಿದೆ. ಸಂವಿಧಾನವನ್ನು, ಭಾರತದಲ್ಲಿರುವ ಸರ್ವಧರ್ಮೀಯರೂ ಗೌರವಿಸಬೇಕು ಹಾಗೂ ಅನುಸರಿಸಬೇಕು. ಹೀಗಿದ್ದೂ, ಮೌಲ್ವಿಗಳು, ವಿವಾಹ ಹಾಗೂ ತಲಾಖ್ ವಿಷಯಗಳಲ್ಲಿ ಸ್ವತಂತ್ರ ನ್ಯಾಯಾಲಯಗಳಂತೆ ಆದೇಶ ಹೊರಡಿಸುತ್ತಿರುವುದು ಸಂವಿಧಾನಕ್ಕೆ ಎಸಗುವ ಅಪಚಾರವಲ್ಲವೇ?