ಅನಾದಿ ಕಾಲದಿಂದಲೂ ಕೂಡ್ಲಿಗಿ ಪಟ್ಟಣ ಸೇರಿದಂತೆ, ಮೊರಬನಹಳ್ಳಿ, ಅಮ್ಮನ ಕೆರೆ, ಕೆ.ಕೆ. ಹಟ್ಟಿ ಗ್ರಾಮಗಳ ರೈತರು ತಮ್ಮ ಎತ್ತು, ದನ ಕರುಗಳು ಹಾಗೂ ಮೇಕೆಗಳನ್ನು ಮೇಯಿಸಲು ಈ ಗುಡ್ಡಗಳನ್ನೆ ಅವಲಂಬಿಸಿದ್ದರು. ಆದರೆ ಈಗ ರಸ್ತೆ ನಿರ್ಮಾಣಕ್ಕೆ ಯಾವುದೇ ಪರವಾನಗಿ ಇಲ್ಲದೆ ಮಣ್ಣನ್ನು ಅಗೆದು ಸಾಗಿಸ ಲಾಗುತ್ತಿದೆ. ಇದರಿಂದ ಗುಡ್ಡದಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಗಿಡ ಮರಗಳು ನೆಲಕ್ಕುರುಳಿವೆ.