ಮಿತವೆಚ್ಚ, ಸಮೃದ್ಧ ಫಸಲು: ಹೆಚ್ಚು ಸಾಲ ಮಾಡಿಲ್ಲ. ಕೇವಲ ಬೀಜ, ಗೊಬ್ಬರ ಖರೀದಿಗೆ ಒಟ್ಟು ರೂ 1 ಲಕ್ಷದಷ್ಟು ಸಾಲ ಇದೆ. ಕುರಿಹಿಂಡನ್ನು ಜಮೀನಿನಲ್ಲಿ ನಿಲ್ಲಿಸಿದ್ದೇನೆ. ಅವುಗಳ ಹಿಕ್ಕೆಯೇ ಗೊಬ್ಬರ, ಕಾಲಕಾಲಕ್ಕೆ ಕಳೆ ತೆಗೆದಿದ್ದೇನೆ. ಸುಧಾರಿತ ತಳಿ ಆದ್ದರಿಂದ ಕೀಟನಾಶಕದ ಖರ್ಚು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ ಎಂದರು ಅವರು.