ರಾಮನಗರ: ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಯಲ್ಲಿನ ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕನಕಪುರ ತಾಲ್ಲೂಕಿನ ಹಾರೋಬೆಲೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ಸದ್ಯ ಜಲಾಶಯದ ಮೂಲಕ 17,900 ಕ್ಯೂಸೆಕ್ ನಷ್ಟು ನೀರನ್ನು ಅರ್ಕಾವತಿ ನದಿಗೆ ಹರಿಸಲಾಗುತ್ತಿದೆ. ಈ ನದಿಯು ಸಂಗಮದ ಬಳಿ ಕಾವೇರಿಯನ್ನು ಸೇರಿಕೊಂಡು ಅಲ್ಲಿಂದ ತಮಿಳುನಾಡಿನತ್ತ ಹರಿಯುತ್ತಿದೆ. 18.4 ಮೀಟರ್ ನಷ್ಟು ಎತ್ತರ ಇರುವ ಜಲಾಶಯವು 1.4 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.