ಬೆಂಗಳೂರು: ‘ಭಾರತದಲ್ಲಿ ಇತ್ತೀಚೆಗೆ ಉಂಟಾಗುತ್ತಿರುವ ಪ್ರವಾಹ ಪರಿಸ್ಥಿತಿಗೆ ತಾಪಮಾನ ಬದಲಾವಣೆ ಕಾರಣ. ಇದರ ಜೊತೆ, ನದಿ ದಂಡೆಗಳಲ್ಲಿ ಯೋಜನಾರಹಿತವಾಗಿ ಜನವಸತಿ ನೆಲೆಗಳು ಆವ್ಯಾಹತವಾಗಿ ತಲೆ ಎತ್ತಿರುವುದು ಇನ್ನೂ ಹೆಚ್ಚಿನ ಅನಾಹುತಗಳು ಸಂಭವಿಸಲು ಕಾರಣವಾಗಿದೆ’ ಎಂದು ಸ್ವಿಟ್ಜರ್ಲೆಂಡ್ನ ಬರ್ನ್ ವಿಶ್ವವಿದ್ಯಾಲಯದ ಹವಾಮಾನ ಮತ್ತು ಪರಿಸರ ಭೌತವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಥಾಮಸ್ ಸ್ಟಾಕರ್ ತಿಳಿಸಿದರು.