ಆತಂಕಗೊಂಡ ಪೋಷಕರು ಸಂಬಂಧಿಕರು ಹಾಗೂ ಶರತ್ನ ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದ್ದಾರೆ. ಮಗ ಪತ್ತೆಯಾಗಿರಲಿಲ್ಲ. ಕೆಲಹೊತ್ತಿನಲ್ಲಿ ನಿರಂಜನ್ ಅವರಿಗೆ ಕರೆ ಮಾಡಿದ ದುಷ್ಕರ್ಮಿ ‘ನಿಮ್ಮ ಮಗನನ್ನು ಅಪಹರಿಸಿದ್ದೇವೆ. ₹ 50 ಲಕ್ಷ ಹಣ ನೀಡಿದರೆ ಅವನನ್ನು ಬಿಟ್ಟು ಕಳುಹಿಸುತ್ತೇವೆ’ ಎಂದಿದ್ದಾರೆ. ಜತೆಗೆ ಶರತ್ನನ್ನು ಕೂಡಿಹಾಕಿದ ವಿಡಿಯೊವನ್ನು ಚಿತ್ರೀಕರಿಸಿ ನಿರಂಜನ್ ಅವರ ಮೊಬೈಲ್ಗೆ ಕಳುಹಿಸಿದ್ದಾರೆ.