ಮದ್ದೂರು: ಸಮೀಪದ ಆಲೂರು ಗ್ರಾಮದ ಇತಿಹಾಸ ಪ್ರಸಿದ್ಧ ಬೀರೇಶ್ವರ ದೇಗುಲದ ಬಳಿ ಇರುವ ಪುರಾತನ ನೀರಿನ ಕಲ್ಯಾಣಿಗಳು ಕಾಯಕಲ್ಪಕ್ಕಾಗಿ ಕಾದಿವೆ.
ದೇಗುಲದ ಬಳಿಯ ಕೆರೆಯಂಗಳದಲ್ಲಿ ಒಂದು ಕಲ್ಯಾಣಿಯಿದೆ. ಇನ್ನೊಂದು ಬೀರೇಶ್ವರ ತೋಪಿನಲ್ಲಿದೆ. ಈ ಎರಡು ಕಲ್ಯಾಣಿಗಳು ಗಿಡಗಂಟಿಗಳಿಂದ ಆವೃತವಾಗಿದ್ದು, ಹಾವು ಹಲ್ಲಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಕಲ್ಯಾಣಿಯಲ್ಲಿ ಹೂಳು ತುಂಬಿರುವುದರಿಂದ ನೀರು ಸಂಗ್ರಹಕ್ಕೂ ಕುತ್ತು ಬಂದಿದೆ.