ನಗರದ ಹೊರವರ್ತುಲಗಳಲ್ಲಿ ಉಳಿದುಕೊಂಡಿರುವ ಕೃಷಿ ಭೂಮಿಯ ವಾಸ್ತವ ಚಿತ್ರಣವೇನು, ಅಲ್ಲಿ ಬೆಳೆಯುವ ತರಕಾರಿ, ಸೊಪ್ಪು, ಹಣ್ಣು, ಹೂವುಗಳಿಗೆ ಯಾವ ನೀರು ಬಳಕೆಯಾಗುತ್ತಿದೆ, ಕೊಳಚೆ ಸಾಗುವ ಹಾದಿ ಮತ್ತು ವಿಸರ್ಜನೆಯಾಗುವ ಪ್ರದೇಶದ ಮೇಲೆ ಕೊಳಚೆ ನೀರು, ತ್ಯಾಜ್ಯ ಬೀರಿರುವ ಪರಿಣಾಮಗಳೇನು ಎಂಬ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವವರು ಎಂ.ಜಿ. ರಸ್ತೆಯ ಮೆಟ್ರೊ ರಂಗೋಲಿ ಕಲಾ ಕೇಂದ್ರಕ್ಕೆ ಭೇಟಿ ನೀಡಬಹುದು. ನಗರದ ಹೊರವರ್ತುಲ ಪ್ರದೇಶಗಳ ಅನೇಕ ವಾಸ್ತವ ಚಿತ್ರಣಗಳ ಮೇಲೆ ಬೆಳಕು ಚೆಲ್ಲುವ ಛಾಯಾಚಿತ್ರಗಳ ಪ್ರದರ್ಶನ ಅಲ್ಲಿ ನಡೆದಿದೆ.