ಇತ್ತ ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಸಿದ್ಧತೆಗಳಾಗುತ್ತಿವೆ. ಕವಿಗೋಷ್ಠಿ ಸಮಿತಿ ನಾಲ್ಕು ಕವಿಗೋಷ್ಠಿಗಳನ್ನು ಮತ್ತು ಒಂದೆರಡು ವಿಚಾರ ಸಂಕಿರಣಗಳನ್ನು ನಡೆಸುವುದು ಖಚಿತವಾಗಿದೆ. ಅಂದರೆ ಸೆಪ್ಟೆಂಬರ್, ನವೆಂಬರ್, ಡಿಸೆಂಬರ್ ತಿಂಗಳು ಭರ್ಜರಿ ಸಾಹಿತ್ಯ ಸಮಾರಾಧನೆ. ಸಾಹಿತಿಗಳಿಗೆ ಸುಗ್ಗಿ. ತಗ್ಗಿ ಬಗ್ಗಿ ನಡೆವವರಿಗೆ ಹುಗ್ಗಿ, ಖಜಾನೆ ಪೆಗ್ಗಿ ಎಂದಂತಾಯಿತು.
–ರಾಜೇಂದ್ರ ಎ., ಮೈಸೂರು