ಗ್ರಾಮದ ಒಬ್ಬ ಮುಖ್ಯಸ್ಥರು ಬೆಳಿಗ್ಗೆಯೇ ಪಡಿತರ ಕೇಂದ್ರದ ಬಳಿ ಬರಬೇಕು. ತಮ್ಮ ಗ್ರಾಮದ ಪಡಿತರದಾರರು ಇವರು ಎಂದು ಗುರುತಿಸಬೇಕು. ಗ್ರಾಹಕರ ಜೊತೆ ಗ್ರಾಮದ ಮುಖ್ಯಸ್ಥರ ಹೆಬ್ಬೆಟ್ಟು ಗುರುತು ಸಹ ದಾಖಲಿಸಲಾಗುತ್ತದೆ. ಇದರಿಂದ ಸಮಸ್ಯೆ ತೀವ್ರವಾಗಿದೆ. ಕೂಲಿ ಕೆಲಸಕ್ಕೆ ತೆರಳುವ ಬಡವರು ಅಕ್ಕಿಗಾಗಿ ದಿನಗಟ್ಟಲೆ ಕಾದು ಕುಳಿತುಕೊಳ್ಳಬೇಕಾಗಿದೆ.