ಜಮ್ಮುಕಾಶ್ಮೀರ ನಿವಾಸಿ ಸುಧಾಕರ್ ಧಾರ್ ದ್ವಿವೇದಿ ಅಲಿಯಾಸ್ ದಯಾನಂದ್ ಪಾಂಡೆ ಮತ್ತು ಥಾಣೆ ನಿವಾಸಿ ಸುಧಾಕರ್ ಓಂಕಾರ್ನಾಥ್ ಚತುರ್ವೇದಿ ಅಲಿಯಾಸ್ ಚಾಣಾಕ್ಯ ಸುಧಾಕರ್ ಈ ಇಬ್ಬರು ಆರೋಪಿಗಳಿಗೆ ಸಮಾನತೆ ಆಧಾರದ ಮೇಲೆ ಜಾಮೀನಿಗೆ ಒಪ್ಪಿಗೆ ನೀಡಿದೆ. ಈ ಇಬ್ಬರು ಆರೋಪಿಗಳು ಮುಚ್ಚಳಿಕೆ ಹಣ ₹5 ಲಕ್ಷ ನೀಡುವಂತೆ ಸೂಚಿಸಿದ ವಿಶೇಷ ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿದೆ.