ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅಂಬೇಡ್ಕರ್ ನಿಗಮದ ಮೂಲಕ ಅನುಷ್ಠಾನಕ್ಕೆ ತಂದಿರುವ ‘ಗಂಗಾಕಲ್ಯಾಣ’ ಯೋಜನೆಯ ಲಾಭ ವಾಸ್ತವದಲ್ಲಿ ಅರ್ಹ ಫಲಾನುಭವಿಗಳಿಗೆ ಲಭಿಸುತ್ತಿಲ್ಲ.
ಸ್ಥಳೀಯ ಶಾಸಕರ ಹಿಂಬಾಲಕರನ್ನು ಹಿಡಿದು, ಅವರ ಮೂಲಕ ಅಧಿಕಾರಿಗಳನ್ನು ಭೇಟಿ ಆಗಿ ಕೈಬಿಸಿ ಮಾಡಿದರೆ ಮಾತ್ರ ಈ ಯೋಜನೆಗೆ ಆಯ್ಕೆ ಆಗಲು ಸಾಧ್ಯ. ಅದೂ ಶಾಸಕರು ಪ್ರತಿನಿಧಿಸುವ ಪಕ್ಷದ ವ್ಯಕ್ತಿ ಆಗಿದ್ದರೆ ಮಾತ್ರ!
ಯೋಜನೆಯ ಫಲಾನುಭವಿಯಾಗಿ ಆಯ್ಕೆ ಆದವರು ಸಹ ಒಂದರಿಂದ ಎರಡು ವರ್ಷ ಕಾಯಬೇಕು. ನಿಜವಾಗಿಯೂ ಬಡ ರೈತರ ಉದ್ಧಾರ ಆಗಬೇಕೆಂದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಮತ್ತು ಮಧ್ಯವರ್ತಿಗಳನ್ನು ದೂರವಿಡಬೇಕು. –ರವಿಕುಮಾರ್ ಪೂಜಾರ್, ದಾವಣಗೆರೆ