ಬಿಜೆಪಿ ಅವಧಿಯಲ್ಲಿ ತಾಲ್ಲೂಕಿಗೆ ಬಂದಿರುವ ಒಟ್ಟು ಅನುದಾನ ₹1,707 ಕೋಟಿ. 240 ಕಿ.ಮೀ ರಸ್ತೆ, ವಾಜಪೇಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ವಸತಿ ಶಾಲೆ, ಪಾಲಿಟೆಕ್ನಿಕ್ ಮತ್ತು ಐಟಿಐ ಕಾಲೇಜು, ಅಂಬೇಡ್ಕರ್ ಮತ್ತು ವಾಜಪೇಯಿ ಭವನ, ಬಂಜಾರ್ ಭವನ, ನಿರಂತರ ಜ್ಯೋತಿ, ಆಸರೆ, ಬಸವ ವಸತಿ ಒಳಗೊಂಡಂತೆ 12,500 ಮನೆ ನೀಡಿದ್ದೇವೆ. ಮಾಜಿ ಸಚಿವ ಕರುಣಾಕರ ರೆಡ್ಡಿ ಅವರನ್ನು ಅನಗತ್ಯವಾಗಿ ಹಿಯಾಳಿಸುವುದನ್ನು ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ ಎಂದರು.