ಅನಂತಪುರ: ಜಿಲ್ಲೆಯಿಂದ ತಡಿಪತ್ರಿ ನಗರಕ್ಕೆ ನೀರು ಪೂರೈಸಲು ವಿಫಲವಾದ ಕಾರಣ ಆಂಧ್ರ ಪ್ರದೇಶ ಟಿಡಿಪಿ ಸಂಸದ ಜೆ.ಸಿ.ದಿವಾಕರ್ ರೆಡ್ಡಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿರುವುದಾಗಿ ಹೇಳಿಕೊಂಡಿದ್ದಾರೆ.
‘ಅನಂತಪುರ ಜಿಲ್ಲೆಯ ಸಂಸದನಾಗಿ ಜನರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸೋತಿದ್ದೇನೆ. ಹಾಗಾಗಿ ಲೋಕಸಭಾ ಸ್ಪೀಕರ್ಗೆ ಸೋಮವಾರ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತೇನೆ’ ಎಂದು ಪ್ರಕಟಿಸಿದ್ದಾರೆ. ಕೆಲ ಶಕ್ತಿಗಳು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುವುದನ್ನು ತಡೆಯುತ್ತಿವೆ ಎಂದೂ ದೂರಿದ್ದಾರೆ.