ಅರ್ಜಿದಾರರ ವಕೀಲ ರವೀಂದ್ರ ಕಾಮತ್, ‘ಪೊಲೀಸರು ಪೂರ್ವ ಸಿದ್ಧತೆಯೊಂದಿಗೆ ಏಳು ಎಫ್ಐಅರ್ ದಾಖಲಿಸಿದ್ದಾರೆ. ಇವೆಲ್ಲಾ ಸುಳ್ಳಿನಿಂದ ಕೂಡಿವೆ ಮತ್ತು ಒಂದೇ ತೆರನಾಗಿವೆ. ಈಗಾಗಲೇ ನಾಲ್ಕು ತಿಂಗಳಿನಿಂದ ಅರ್ಜಿದಾರರು ಬಂಧನದಲ್ಲಿದ್ದಾರೆ. ನೋಟು ಅಮಾನ್ಯ ನಿಯಮಗಳ ಅನುಸಾರ ಆರೋಪಿಯನ್ನು ಬಂಧನದಲ್ಲಿ ಇರಿಸಲು ಅವಕಾಶವಿಲ್ಲ. ಆದ್ದರಿಂದ ಜಾಮೀನು ನೀಡಬೇಕು’ ಎಂದು ಕೋರಿದರು.