ಲಕ್ಷ್ಮೇಶ್ವರ: ಕಳೆದ ಎರಡು ವಾರಗಳ ಹಿಂದೆ ಸುರಿದಿರುವ ಮಳೆಗೆ ಬಳ್ಳಿಶೇಂಗಾ ಹಸುರಿನಿಂದ ಕಂಗೊಳಿಸುತ್ತಿದೆ. ಆದರೆ, ಬೆಳೆಗೆ ಸುರುಳಿ ಪೂಚಿ ರೋಗದ ಕಾಟ ಶುರುವಾಗಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ. ರೋಗಕ್ಕೆ ಸರಿಯಾದ ಉಪಚಾರ ಮಾಡದೆ ಹೋದರೆ ಶೇಂಗಾ ಬಳ್ಳಿ ಸಂಪೂರ್ಣ ಬಾಡಿ ಹೋಗುತ್ತದೆ. ರೈತರು ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.