‘ನಿಮ್ಮ ಮಾತೃ ಭಾಷೆ ತಿಳಿಯದ ವ್ಯಕ್ತಿ ಜತೆ ಮಾತ್ರವೇ ಬೇರೆ ಭಾಷೆಯಲ್ಲಿ ಮಾತನಾಡಿ’ ಎಂದು ಸಲಹೆ ನೀಡಿದ ಅವರು, ಸದ್ಯ ಅಸಹಿಷ್ಣತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ವಿಸ್ತೃತ ಚರ್ಚೆಯಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಸಾಂವಿಧಾನಿಕ ಚೌಕಟ್ಟಿರುವುದನ್ನು ಮರೆಯಬಾರದು. ಪ್ರಜಾಪ್ರಭುತ್ವಕ್ಕಾಗಿ ಕಾನೂನುಗಳ ಅಗತ್ಯವಿದೆ. ಪ್ರತಿಯೊಬ್ಬ ವ್ಯಕ್ತಿಯ ಘನತೆಯೂ ಮುಖ್ಯ. ಆದರೆ, ಇದು ದೇಶದ ಸಮಗ್ರತೆಗಿಂತ ದೊಡ್ಡದಲ್ಲ ಎಂತಲೂ ಹೇಳಿದರು.