ಮುದ್ದೇಬಿಹಾಳ: ಪಟ್ಟಣದ ವ್ಯಾಪ್ತಿಯಲ್ಲಿ ಹಂದಿಗಳು ನಿಗೂಢವಾಗಿ ಸಾಯುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ವ್ಯಕ್ತವಾಗಿದೆ. ಈಚೆಗಿನ ದಿನಗಳಲ್ಲಿ ಹಂದಿಗಳ ಹಾವಳಿ ಹೆಚ್ಚಿದೆ. ಇದರ ನಡುವೆಯೇ ಮಹಾಂತೇಶ ನಗರ, ಬಸವನಗರ, ಪಿಲೇಕೆಮ್ಮ ನಗರ, ಇಂದಿರಾ ನಗರ, ನೇತಾಜಿ ನಗರ, ಸಂಗಮೇಶ್ವರ ನಗರ, ಗಣೇಶ ನಗರ, ವಿದ್ಯಾನಗರ ಸೇರಿದಂತೆ ಹಲ ಬಡಾವಣೆಗಳಲ್ಲಿ ನಿಗೂಢವಾಗಿ ಹಂದಿಗಳು ಮೃತಪಡುತ್ತಿರುವುದು ಪಟ್ಟಣಿಗರ ಆತಂಕ ಹೆಚ್ಚಿಸಿದೆ.