ಮಧುಗಿರಿ: ‘ಕೆಲವು ಮುಖಂಡರ ಪಿತೂರಿಯಿಂದ ಎಸ್.ಎಂ.ಕೃಷ್ಣ ಅವರು 2004ರಲ್ಲಿ ನನ್ನನ್ನು ಪಕ್ಷದಿಂದ ಹೊರ ಹಾಕಿದರು. ಪಿತೂರಿ ನಡೆಸಿದವರನ್ನು ಮಾತ್ರ ನಾನು ಕಾಂಗ್ರೆಸ್ ಕಳ್ಳರು ಎಂದಿದ್ದೇನೆ. ಆದರೆ ಈಗ ಅವರು ಪಕ್ಷದಲ್ಲಿ ಇಲ್ಲ. ಇಂದಿನ ಕಾಂಗ್ರೆಸ್, ಕಳ್ಳರಿಂದ ಮುಕ್ತವಾದ ಪಕ್ಷ’ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.