ಕಥೆಗಾರ ವಸುಧೇಂದ್ರ, ‘ಲೇಖಕನಿಗೆ ಹೊಸತನ್ನು ಕಾಣುವ ಕುತೂಹಲ ಮತ್ತು ಅನ್ವೇಷಣಾ ಸ್ವಭಾವ ಇದ್ದರೆ, ಆ ಕೃತಿಯಲ್ಲಿ ಹೊಸತನ ಇರುತ್ತದೆ. ಗದ್ಯವನ್ನು ಪದ್ಯರೂಪದಲ್ಲಿ ಬರೆಯುವ ವಿಶಿಷ್ಟ ಲೇಖಕ ದತ್ತಾತ್ರಿ. ಅವರು ಸಾಹಿತ್ಯದೊಂದಿಗೆ ರಾಜಕೀಯ, ವಿಜ್ಞಾನ, ಗಣಿತ, ಪರಿಸರ ಎಲ್ಲವನ್ನೂ ಓದಿದ್ದಾರೆ. ಅದೆಲ್ಲವೂ ಅವರ ಸಾಹಿತ್ಯದಲ್ಲಿ ಕಾಣುತ್ತದೆ. ಕಾದಂಬರಿಯಿರಲಿ, ಕಥೆಯಿರಲಿ ವಿದ್ವತ್ತೇ ಮುಖ್ಯ. ಅದಿಲ್ಲದಿದ್ದರೆ ಬರಹ ಶುಷ್ಕವಾಗುತ್ತದೆ. ಅಂತಹ ವಿದ್ವತ್ ಅವರ ಬರಹದಲ್ಲಿದೆ’ ಎಂದು ಅಭಿನಂದಿಸಿದರು.