‘ಫೆಬ್ರುವರಿಯಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಏನೂ ಮಾಡಲಾಗದು. ಇದರಲ್ಲಿ ನನ್ನ ಮತ್ತು ವಿನಯ ಕುಲಕರ್ಣಿ ಅವರ ರಾಜಕೀಯ ಪ್ರಶ್ನೆಯೂ ಸೇರಿಕೊಂಡಿದೆ. ಲಿಂಗಾಯತ ಧರ್ಮ ಘೋಷಿಸಲು ಗಡುವು ನೀಡಿ, ಮುಖ್ಯಮಂತ್ರಿ ಮೇಲೆ ಒತ್ತಡ ಹೇರಬೇಕು. ಮುಖ್ಯಮಂತ್ರಿಗಳು ಮುರುಘಾ ಶರಣರು, ಮಹಂತಾಪ್ಪಗಳ ಮಾತನ್ನು ಕೇಳುತ್ತಾರೆ. ಈ ಬಗ್ಗೆ ತ್ವರಿತಗತಿಯಲ್ಲಿ ಕೆಲಸ ಸಾಗಬೇಕು' ಎಂದು ಅವರು ಹೇಳಿದರು.