‘ಭಯೋತ್ಪಾದಕರನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವ ರಾಷ್ಟ್ರವು ಎಂಥದ್ದು? ಭಾರತದ ಪ್ರಧಾನಿ ಬಳಸುವ ಭಾಷೆಯನ್ನು ನೋಡಿ. ಇವರ ಆಡಳಿತದಲ್ಲಿ ಗೋರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಹತ್ಯೆ ನಡೆಸಲಾಗುತ್ತಿದೆ. ದಸರಾ ಸಂದರ್ಭದಲ್ಲಿ ರೋಹಿಂಗ್ಯಾ ಮುಸ್ಲಿಮರ ಪ್ರತಿಕೃತಿಗಳನ್ನು ದಹನ ಮಾಡಲಾಯಿತು. ರೋಹಿಂಗ್ಯಾ ಮುಸ್ಲಿಮರು ಭಯೋತ್ಪಾದಕರು ಎಂದು ಅವರು ಕರೆದರು. ಆದರೆ, ಭಾರತ ಎಲ್ಲರನ್ನೂ ಭಯೋತ್ಪಾದಕರೆಂದು ಕರೆಯುತ್ತಿದೆ. ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮರ ಮೇಲೆ ಅತ್ಯಾಚಾರ ಮತ್ತು ಕೊಲೆಗಳು ನಡೆದಿದ್ದವು. ಅಮೆರಿಕ ಮೋದಿ ಮೇಲೆ ನಿಷೇಧ ಹೇರಿತ್ತು’ ಎಂದು ಟೀಕಿಸಿದರು.