‘ಉಪೇಂದ್ರ ಪಕ್ಷ ಹುಟ್ಟು ಹಾಕಿರುವುದರಿಂದ ಜನರು ಮತ್ತು ರಾಜ್ಯ ರಾಜಕೀಯದ ಮೇಲೆ ಪರಿಣಾಮ ಬೀರುವುದಿರಲಿ, ಅವರ ಮೇಲೆಯೇ ಪರಿಣಾಮವಾಗದಿದ್ದರೆ ಸಾಕು. ಒಬ್ಬ ನಟನಾಗಿ ಹೊರಹೊಮ್ಮಿದ್ದಾರೆ. ಅವರು ಹಾಗಿದ್ದರೇ ಗೌರವ ಜಾಸ್ತಿ. ಸಿನಿಮಾದಲ್ಲಿ ಬಣ್ಣ ಹಚ್ಚಿಕೊಂಡು ನಟನೆ ಮಾಡುವವರು, ರಾಜಕೀಯದಲ್ಲಿ ನಾಟಕ ಮಾಡಲು ಆಗುವುದಿಲ್ಲ. ಇಲ್ಲಿ ಬಣ್ಣ ಹಚ್ಚದೇ ನಟನೆ ಮಾಡಲು ಹೋದರೆ ಸಿಕ್ಕಿ ಹಾಕಿಕೊಳ್ಳುವುದು ನಿಶ್ಚಿತ. ಇಲ್ಲಿ ಸುಳ್ಳು ಹೇಳಲು ಆಗುವುದಿಲ್ಲ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.