ಇಲ್ಲಿನ ಭವ್ಯ ಮಹಾದ್ವಾರ, ಗೋಪುರಗಳು, ಮಂಟಪಗಳು ಅನಾಥವಾಗಿವೆ. ಏಕಲವ್ಯ ಮುಕ್ತದಳದ ಆರ್.ಜಿ.ಗಿರೀಶ್, ಜಿಲ್ಲಾ ಜಂಟಿ ಕಾರ್ಯದರ್ಶಿ ಕಾಂಚನಮಾಲಾ ನೇತೃತ್ವದಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐತಿಹಾಸಿಕ ಸ್ಥಳದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ದೇವಾಲಯ ಪ್ರವೇಶಿಸಲು ಆಗದಷ್ಟು ಗಿಡ, ಗಂಟಿಗಳು ಬೆಳೆದಿದ್ದವು. ಭಯದ ವಾತಾವರಣವಿತ್ತು. ಗಿಡ, ಗಂಟಿಗಳನ್ನು ತೆರವು ಮಾಡಲಾಗಿದ್ದು, ಈಗ ಮಹಾದ್ವಾರ ಅಂದವಾಗಿ ಕಾಣುತ್ತಿದೆ ಎಂದರು.