ಮತ್ತೊಬ್ಬ ಬಿಜೆಪಿ ಮುಖಂಡ ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಜಯಕುಮಾರ್ ರಾವಲ್ ಅವರು ಚಿತ್ರ ನಿಷೇಧಕ್ಕೆ ಈ ಮೊದಲು ಆಗ್ರಹಿಸಿದ್ದರು. ಸಚಿವ ರಾವಲ್ ಅವರು ’ಪದ್ಮಾವತಿ‘ಯ ಗಂಡ ರಾವಲ್ ರತನ್ ಸಿಂಗ್ ಅವರ ವಂಶಸ್ಥರು ಕೂಡಾ. ಮಹಾರಾಷ್ಟ್ರ ಮುಖ್ಯಮಂತ್ರಿ ಫಡಣವೀಸ್ ಅವರನ್ನು ಭೇಟಿಯಾಗಿದ್ದ ರಾವಲ್, ಇತಿಹಾಸದಲ್ಲಿ ಸತ್ಯ ಘಟನೆಗಳನ್ನು ಹೇಗೆ ತಿರುಚಲಾಗಿದೆ ಎಂದು ವಿವರಿಸಿದ್ದರು.