ತಮ್ಮನ್ನು ತಪಾಸಣೆಗೊಳಪಡಿಸಿದ್ದನ್ನು ವಿರೋಧಿಸಿದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ‘ಹೆಲಿಪ್ಯಾಡ್ಗೆ ಶಾಸಕರು, ಸಚಿವರೊಂದಿಗೆ ಅವರ ಬೆಂಬಲಿಗರು ಬಂದಿದ್ದಾರೆ. ಅವರನ್ನು ತಪಾಸಣೆಗೆ ಒಳಪಡಿಸುತ್ತಿಲ್ಲ. ಆದರೆ ನಮ್ಮನ್ನು (ರೈತ ಮುಖಂಡರು) ಮಾತ್ರ ತಪಾಸಣೆ ಮಾಡುತ್ತಿದ್ದೀರಿ. ಆ ಮೂಲಕ ಜನತೆಯನ್ನು ಅಪಮಾನಕ್ಕೀಡು ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.