‘ಬಸರಿಗಿಡದ ವೀರಪ್ಪನವರು ಆ ಕಾಲದ ಬರಗಾಲದ ಬಂಟ ಎಂದೇ ಹೆಸರಾಗಿದ್ದರು. ಬರ ಪ್ರದೇಶಗಳಲ್ಲಿ ರೈತರ ನೋವಿಗೆ ಸ್ಪಂದಿಸಿ, ದಾನ, ಧರ್ಮ ಮಾಡುತ್ತ ಬಂದಿದ್ದ ಅವರನ್ನು ಕರ್ನಾಟಕದ ಫೋರ್ಡ್ ಎಂದು ಕರೆಯಲಾಗುತ್ತಿತ್ತು. ಕರ್ನಾಟಕ ಏಕೀಕರಣ ಚಳುವಳಿಯ ವಿವಿಧ ಸಭೆ, ಸಮ್ಮೇಳನಗಳಿಗೆ ದಾನ ಹಾಗೂ ಅಗತ್ಯ ಪ್ರೋತ್ಸಾಹ ನೀಡುವ ಮೂಲಕ ಏಕೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ’ ಎಂದರು.