ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ನಾಗಮಂಗಲ– ಶ್ರವಣಬೆಳಗೊಳ ರಸ್ತೆ, ಪಟ್ಟಣದ ಟಿ.ಬಿ. ಬಡಾವಣೆಯಿಂದ– ಕೆಂಚಗೋನಹಳ್ಳಿ ವರೆಗೆ ಇತ್ತೀಚೆಗಷ್ಟೆ ಡಾಂಬರೀಕರಣ ಮಾಡಲಾಗಿದೆ, ಇದರ ಮಧ್ಯೆ ಬರುವ ಹೂವಿನಹಳ್ಳಿ ಹಳ್ಳದ ಬಳಿ ರಸ್ತೆಗೆ ಮಣ್ಣನ್ನು ಸುರಿದಿದ್ದು ಪ್ರಯಾಣಿಕರು ಅದರಲ್ಲೂ ದ್ವಿಚಕ್ರ ವಾಹನ ಸವಾರರು, ಕಾರು ಮತ್ತು ಆಟೊ ಸಂಚರಿಸಲು ತೀವ್ರ ತೊಂದರೆ ಅನುಭವಿಸಬೇಕಾಗಿದೆ.