‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉತ್ಸವ ನಡೆಯುತ್ತಿವೆ. ರಾಯಚೂರಿನಲ್ಲಿ ಮಾತ್ರ ಏಕೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಕೊನೆಯ ವರ್ಷವಾದರೂ ಜಿಲ್ಲಾ ಉತ್ಸವ ನಡೆಸಲು ಕ್ರಮ ಕೈಕೊಳ್ಳಬೇಕು. ಇಲ್ಲದಿದ್ದರೆ ಕಲಾವಿದರು ಹೋರಾಟದ ಮಾರ್ಗ ಹಿಡಿಯುವುದು ಅನಿವಾರ್ಯ ಆಗುತ್ತದೆ’ ಎಂದು ಹೇಳಿದರು. ಕಲಾವಿದರಾದ ರಘುಪತಿ ಪೂಜಾರಿ, ವಿಜಯಕುಮಾರ, ಬಸವರಾಜ, ರಾಘವೇಂದ್ರ, ಈರಣ್ಣ ಇದ್ದರು.