ಶುಂಠಿಕುಂಬ್ರಿ, ಜೋಗಿಕುಂಬ್ರಿ ಮತ್ತು ಗುಳ್ಯದ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಬಳಿ ಸಮಸ್ಯೆ ವಿವರಿಸಲು ಹೋದಾಗ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ. ರತನ್ ತಡೆದರು. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಯಾವುದೇ ಚರ್ಚೆಗೆ ಆಸ್ಪದ ಇಲ್ಲ ಎಂದು ಉಡಾಫೆಯಿಂದ ತಿರಸ್ಕರಿಸಿದರು ಎಂದು ಗ್ರಾಮಸ್ಥರು ಬೇಸರಿಸಿದ್ದಾರೆ.