‘ಪ್ರವಚನ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಮಾತ್ರ ಸಮಾಜ ಜಾಗೃತಿ ಆಗುತ್ತದೆ. ಆದರೆ, ಇತ್ತಿಚೀನ ದಿನಗಳಲ್ಲಿ ಪ್ರವಚನಗಳು ಹೆಚ್ಚಾಗಿ ನಡೆಯದ ಕಾರಣ ಬಸವ ತತ್ವದ ಬಳ್ಳಿ ಬೆಳೆಯುವುದು ನಿಂತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು. ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಮಾತನಾಡಿ, ‘ಬಸವಣ್ಣ ಅಂದರೆ ಪ್ರೇಮ, ಅದು ಆಂತರಿಕವಾಗಿ ಹಾಗೂ ಬಾಹ್ಯವಾಗಿಯೂ ವಿಸ್ತಾರಗೊಳ್ಳಬೇಕಿದೆ’ ಎಂದರು.