ಅತ್ಯಾಧುನಿಕ ತಂತ್ರಜ್ಞಾನದ ಫಲವಾಗಿ ಇಂದು ವಿಶ್ವವೇ ನಮ್ಮ ಅಂಗೈಯಲ್ಲಿ ಇರುವಾಗ, ಉತ್ತರ ಕರ್ನಾಟಕದ ಕುಂದುಕೊರತೆಗಳನ್ನು ಚರ್ಚಿಸುವುದಕ್ಕಾಗಿ ಅಲ್ಲಿಗೇ ಹೋಗಿ ಅಧಿವೇಶನ ನಡೆಸುವುದು ಅಗತ್ಯವೇ? ಇಂಥ ಅಧಿವೇಶನಕ್ಕಾಗಿ ಇಷ್ಟೊಂದು ಹಲವು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವುದು ಹಾಸ್ಯಾಸ್ಪದ.
ಅದಕ್ಕೆ ಬದಲಾಗಿ ಆ ಹಣವನ್ನೂ ಆ ಭಾಗದ ಅಭಿವೃದ್ಧಿ ಯೋಜನೆಗಳಿಗೆ ಉಪಯೋಗಿಸಿದರೆ ಸಾರ್ಥಕವೆನಿಸುತ್ತದೆ. ಸುವರ್ಣಸೌಧ ಕಟ್ಟಡವನ್ನು ಕಾಲೇಜು ಅಥವಾ ಆಸ್ಪತ್ರೆಯನ್ನಾಗಿ ಪರಿವರ್ತಿಸಬಹುದು. ಮುಂಬರುವ ಸರ್ಕಾರವಾದರೂ ಈ ನಿಟ್ಟಿನಲ್ಲಿ ಯೋಚಿಸುವುದು ಉತ್ತಮ.