ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಿದಾಗ ಕಾಶ್ಮೀರಕ್ಕೆ 370ನೇ ವಿಧಿಯಂತೆ ಪ್ರತ್ಯೇಕ ಸ್ಥಾನಮಾನ ನೀಡಿ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟಿಲ್ಲವೇ? ಆಗಿನಿಂದ ಫಾರೂಕ್ ಅವರ ಕುಟುಂಬ ರಾಜ್ಯದ ಜನರಲ್ಲಿ ಪ್ರತ್ಯೇಕತೆಯ ವಿಷಬೀಜ ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿಲ್ಲವೇ? ಹಿಂಸೆಗೆ ಹೆದರಿ ಕಾಶ್ಮೀರದಿಂದ ಓಡಿ ಹೋಗಿರುವ ಕಾಶ್ಮೀರಿ ಪಂಡಿತರ ಜಮೀನನ್ನು ಸ್ಥಳೀಯರು ಅನುಭವಿಸುತ್ತಿರುವುದು ಸುಳ್ಳೇ?