ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅನ್ಯಾಯವನ್ನು ತಪ್ಪಿಸಬೇಕು ಎಂದು ರೈತರು ಮುಖಂಡರು ಎ.ಪಿ.ಎಂ.ಸಿ ಲೆಕ್ಕಾಧಿಕಾರಿ ನಾಗರಾಜು ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ನಾಗಪ್ಪ, ಸಣ್ಣ ರಾಮಪ್ಪ, ರಂಗಣ್ಣ, ಕಂಪಲಪ್ಪ, ಯಲ್ಲಪ್ಪ, ಸುಬ್ಬಣ್ಣ ತಿಮ್ಮಪ್ಪ ಭಾಗವಹಿಸಿದ್ದರು.