ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಕುರಿತು ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯಬೇಕು. ಜನರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು. ಈ ಅಧಿವೇಶನವು ಈಗಿನ ಸರ್ಕಾರದ ಆಡಳಿತ ಅವಧಿಯ ಕೊನೆಯ ಅಧಿವೇಶನ ಆಗಲಿದೆ. ಆದಕಾರಣ ಅರ್ಥಪೂರ್ಣವಾಗಲಿ. ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಚರ್ಚೆಗಳು ಸಾಗಲಿ.