ಕಂಬಳದ ಕೋಣಗಳು, ಜಲ್ಲಿಕಟ್ಟು ಸ್ಪರ್ಧೆ, ಬೀದಿ ಬದಿ ನಾಯಿಗಳು... ಹೀಗೆ ಪ್ರಾಣಿಹಿಂಸೆಯ ಬಗ್ಗೆ ಅಪಾರ ಕಳಕಳಿ ತೋರುವ ‘ಪೆಟಾ’ ಸ್ವಯಂಸೇವಾ ಸಂಸ್ಥೆಯ ಜೀವಪರ ಕರುಣೆ ಶ್ಲಾಘನೀಯ. ಆದರೆ ಬೀದಿ ಬದಿ ಬದುಕುವ ಕಂದಮ್ಮಗಳಿಗೆ ನಾಯಿಗಳು ಕಚ್ಚಿದಾಗ, ಕರುಳು ಕಿತ್ತು, ನೆತ್ತರು ಹೀರಿದಾಗ ಇವರ ಮನಸ್ಸು ಏಕೆ ಚುರ್ರೆನ್ನುವುದಿಲ್ಲ? ಆರೋಗ್ಯವಂತ ದನಕರು, ಆಡು, ಕುರಿ, ಕೋಳಿಗಳನ್ನು ಕೊಚ್ಚಿ ಕೊಲ್ಲುವಾಗ ಕರುಳು ಏಕೆ ಕರಗುವುದಿಲ್ಲ?